ಹಲೋ ಸ್ನೇಹಿತರೇ, ಆರೋಗ್ಯವೇ ಮಹಾಭಾಗ್ಯ ಎನ್ನುತ್ತಾರೆ ಹಿರಿಯರು. ನೀವು ಆರೋಗ್ಯವಂತರಾಗಿದ್ದರೆ, ಅದೇ ದೊಡ್ಡ ಆಸ್ತಿಯಾಗಿದೆ. ಈ ದಿನಗಳಲ್ಲಿ ಯಾವುದೇ ವಯಸ್ಸಿನ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ಸರ್ಕಾರ ಆರೋಗ್ಯ ವಿಮೆಯನ್ನು ನೀಡುತ್ತಿದ್ದರೂ ಸಕಾಲಕ್ಕೆ ವಿತರಣೆಯಾಗುತ್ತಿಲ್ಲ.

ಹೀಗಾಗಿಯೇ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಇಂತಹ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ತಂದಿರುವ ಯೋಜನೆಯಾಗಿದೆ. ಆಯುಷ್ಮಾನ್ ಭಾರತ್ ವಯೋವೃದ್ಧರಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತದೆ.
ಏನಿದು ಯೋಜನೆ.?
ಆಯುಷ್ಮಾನ್ ಭಾರತ್ ಯೋಜನೆಯು ಭಾರತದಲ್ಲಿ ಆರೋಗ್ಯವನ್ನು ಸುಧಾರಿಸಲು ಪ್ರಾರಂಭಿಸಲಾದ ಪ್ರಮುಖ ಸರ್ಕಾರಿಯಾದ ಯೋಜನೆಯಾಗಿದೆ. ಈ ಯೋಜನೆಯನ್ನ 2018ರಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಿತು, ಇದರ ಮುಖ್ಯ ಉದ್ದೇಶವೆಂದ್ರೆ ಜನಸಂಖ್ಯೆಯ ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ಆರೋಗ್ಯ ಸೇವೆಗಳನ್ನು ಪ್ರವೇಶಿಸುವಂತೆ ಮಾಡುವುದು. ಈ ಯೋಜನೆಯನ್ನು ಮೂಲಕವಾಗಿ ಪ್ರತಿ ಕುಟುಂಬಕ್ಕೆ ರೂ. 5 ಲಕ್ಷದವರೆಗೆ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಇದರಿಂದ ಜನರು ಆಸ್ಪತ್ರೆ ಬಿಲ್ಗಳಿಂದ ಮುಕ್ತರಾಗುತ್ತಾರೆ. ಅಗತ್ಯವಾದ ವೈದ್ಯಕೀಯ ಸೇವೆಗಳಿಗೆ ಸುಲಭವಾದ ಪ್ರವೇಶವನ್ನು ಪಡೆಯಬಹುದು.
ಆಯುಷ್ಮಾನ್ ಭಾರತ್ ಯೋಜನೆಯನ್ನು ಮುಖ್ಯವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. “ಆಯುಷ್ಮಾನ್ ಭಾರತ್ – ಜನ ಆರೋಗ್ಯ ಅಭಿಯಾನ” (AB-PMJAY), ಈ ಯೋಜನೆತು ಬಡವರಿಗೆ ಆರೋಗ್ಯ ವಿಮೆಯನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಎರಡನೆಯದಾಗಿ, “ಆಯುಷ್ಮಾನ್ ಭಾರತ್ – ಆರೋಗ್ಯ ಯೋಜನೆಗಳು” (AB-HWCs), ಇದು ಗ್ರಾಮೀಣ ಪ್ರದೇಶಗಳಲ್ಲಿ ಸೌಲಭ್ಯಗಳೊಂದಿಗೆ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುತ್ತದೆ. ಈ ದೇಶದ ಲಕ್ಷಾಂತರ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಬಡತನದಲ್ಲಿರುವ ಜನಗಳ ಆರೋಗ್ಯ ಅಗತ್ಯಗಳನ್ನು ಪೂರೈಸುವಲ್ಲಿ ಇದು ಪ್ರಮುಖ ಪಾತ್ರವಾದ ವಹಿಸುತ್ತದೆ.
ಇದನ್ನು ಓದಿ: ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿ.!! ಇಲ್ಲಿಂದೆ ಬಂಪರ್ ಆಫರ್
ಯಾರು ಅರ್ಹರು.?
ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಹಿರಿಯ ನಾಗರಿಕರಿಗಾಗಿ ಮಾತ್ರ ಪ್ರಾರಂಭಿಸಿದ್ದಾರೆ. 70 ವರ್ಷ ಮೇಲ್ಪಟ್ಟಂತಹ ಹಿರಿಯ ನಾಗರಿಕರು ಈ ಯೋಜನೆಗೆ ಅರ್ಹರು. ಆಧಾರ್ ಕಾರ್ಡ್ ಇದ್ರೆ ಸಾಕು, ಕುಟುಂಬದ ವೃದ್ಧರು 5 ಲಕ್ಷ ರೂ.ವರೆಗೆ ಉಚಿತವಾದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದು. ಒಂದೇ ಕುಟುಂಬದಲ್ಲಿ ಇಬ್ಬರಿಗಿಂತ ಹೆಚ್ಚು ವಯೋವೃದ್ಧರಿದ್ರೆ ಪರಿಸ್ಥಿತಿಯನ್ನು ಹೀಗೆಯೇ ಎಂದು ಭಾವಿಸುವವರಿಲ್ಲ.
ಸರಿ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಅರ್ಹವಾದ ವ್ಯಕ್ತಿಗಳಿದ್ದರೂ ಸಹ, ಈ ಯೋಜನೆಯು ಅವರಿಗೆ ಅನ್ವಯಿಸುತ್ತದೆ. 14.9 ಕೋಟಿ ಹಿರಿಯ ನಾಗರಿಕರು ಈ ಯೋಜನೆಗೆ ಅರ್ಹರಾಗಿದ್ದಾರೆ. ಈ ಯೋಜನೆಯ ಮೂಲಕವಾಗಿ ಒಂದು ಕುಟುಂಬಕ್ಕೆ ರೂ. 5 ಲಕ್ಷ ವಿಮೆಯನ್ನು ಲಭ್ಯವಿದೆ. ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಅರ್ಹರಾಗಿದ್ರೆ ಅವರೆಲ್ಲರೂ ಸೇರಿಯು ರೂ.5 ಲಕ್ಷದವರೆಗೆ ಈ ಉಚಿತವಾದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದು.
ಸೇವೆಗಳು ಯಾವಾಗ ಪ್ರಾರಂಭವಾಗುತ್ತವೆ?
ಈ ಯೋಜನೆಗೆ ದಾಖಲಾದ ಹಿರಿಯರು ಮೊದಲ ದಿನದಿಂದಲೇ ಚಿಕಿತ್ಸೆ ಪಡೆಯಬಹುದು. ಆದ್ದರಿಂದ ಈ ವಿಮಾ ರಕ್ಷಣೆಯು ತಕ್ಷಣವೇ ಪ್ರಾರಂಭವಾಗುತ್ತದೆ.
ಇತರೆ ವಿಷಯಗಳು:
ಈ ಸ್ಟೂಡೆಂಟ್ಸ್ಗೆ ಸಿಕ್ತು ಸೂಪರ್ ಡೂಪರ್ ಆಫರ್.!! ಒಂದೇ ಕ್ಲಿಕ್ನಲ್ಲಿ ನಿಮ್ಮದಾಗುತ್ತೆ ₹75,000
ಪಿಎಂ ಕಿಸಾನ್ ಯೋಜನೆಯಡಿ ಭರ್ಜರಿ ಸಬ್ಸಡಿ! ಟ್ರ್ಯಾಕ್ಟರ್ಗಾಗಿ ಇಂದೇ ಅರ್ಜಿ ಸಲ್ಲಿಸಿ